ಮೊಟ್ಟೆ

ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು
ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ
ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ

ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ
ಒತ್ತಿದರೂ ಒಡೆಯದೆ ಕುಟ್ಟಿದರೂ ಸಿಡಿಯದೆ
ಮಂಕುಬೂದಿಯನೆರಚಿ ಮಿಕನನ್ನಾಗಿಸಿ ಮಣಿಸಿ
ಬೆರಕಿ ಗುಣವ ಕಲಿಸಿ ನಕ್ಕಿತವ್ವಾ ಮೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ಮಾಯಾ ನಗರಿಯ ಮೊಟ್ಟೆ

ಕಣ್ಣಲಿ ಹಳ್ಳವ ಅಗೆದು ಮೂಗಿಗೆ ದಾರವ ಬಿಗಿದು
ಕಿವಿಯಾ ಕಚ್ಚಿ ನಾಲಗೆ ಚುಚ್ಚಿ ಬಾಯ ಮುಚ್ಚಿ
ದೆಯ್ಯ ಮೆಟ್ಟಿದ ಹಾಗೆ ಮೈಯಾ ಮೆಟ್ಟಿಕೊಂಡು
ಬದುಕಾ ನರಕಾ ಮಾಡಿ ಕೊಕ್ಕಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ತಿಳಿವನು ತಿರುಚೊ ಮೊಟ್ಟೆ

ಕೊಡವಿದ್ದಕ್ಕೇ ಹೊರಳಿ ಕೆಡವಿದಕ್ಕೇ ಕೆರಳಿ
ಛಂಗನೆ ಮೇಲೆ ನೆಗೆದು ನೆತ್ತಿಯ ಮೇಲೆ ಕುಣಿದು
ಸರಸರ ಒಳಗೆ ಇಳಿದು ಬತ್ತಿಯ ಹಾಗೆ ಉರಿದು
ಸುಡುಸುಡು ಅಂತು ಮೊಟ್ಟೆ ಸುಟ್ಟಿತವ್ವಾ ಹೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ನಂಜನು ಉಣಿಸೊ ಮೊಟ್ಟೆ

ಮಾಟವ ಮಾಡಿದೆ ಮಂತ್ರವ ಹಾಕಿದೆ
ಹರಕೆಯ ಹೊತ್ತು ಮುಡಿಪನು ಕಟ್ಟಿದೆ
ಹೋದೆ… ಹೋದೆ… ಅಂದು, ಒಮ್ಮೆಗೆ ಒಳಗೇ ಬಂದು
ಮುಳ್ಳಿನ ಹಾಗೆ ಮೊನೆದೂ, ನಟ್ಟಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ಮೂಜಗ ಮುಕ್ಕಿದ ಮೊಟ್ಟೆ

ಕೆಟ್ಟೇ ಅನಿಸಿತು ಬಿಡುಗಡೆ ಬಯಸಿತು
ಹೃದಯವು ಕಲಿಸಿತು ಅರಿವದು ಉಳಿಸಿತು
ಧೂಪಾ ಹಚ್ಚಿ ದೀಪಾ ಬೆಳಗಿ ಹೂಗಳನೇರಿಸಿ
ತಟ್ಟೆಯಲ್ಲಿಟ್ಟು ಶಿವನಿಗೆ ಕೊಟ್ಟೆ
ಗಲ್ಲವ ಬಡಿದು ಬೆಲ್ಲದ ಮಾತಲಿ ಮೊರೆಯನು ಇಟ್ಟೆ

ಎಲ್ಲೇ ಹುಡುಗಿ ಮೊಟ್ಟೆ? ಎಲ್ಲೇ ಹುಡುಗಿ ಮೊಟ್ಟೆ?
ನನಗೆ ನಾನೆ ಕೇಳುವೆ, ನನಗೆ ನಾನೆ ಹೇಳುವೆ
ಮುಕ್ಕಣ್ಣನಿಗೆ ಕೊಟ್ಟು ಕೈಯ ಮುಗಿದು ಬಿಟ್ಟೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹತ್ತಿ… ಚಿತ್ತ… ಮತ್ತು…
Next post ಗೊರಕೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys